ಗಿರಿಜಾ ಎಂದೂ ಕರೆಯಲ್ಪಡುವ ಶಿವ ಮತ್ತು ಪಾರ್ವತಿಯ ವಿವಾಹವನ್ನು ಚಿತ್ರಿಸುವ ಶಿಲ್ಪಗಳು ಬೆಂಗಳೂರು ಪ್ರದೇಶದ ಹಲವಾರು ದೇವಾಲಯಗಳಲ್ಲಿ ಕಂಡುಬರುತ್ತವೆ. ಇಲ್ಲಿ, ಕಾಮಾಕ್ಷಿ ದೇಗುಲದ ಬಾಹ್ಯ ಗೋಡೆಯನ್ನು ಸುತ್ತುವರೆದ, ಜೀವಂತಿಕೆಯಿಂದ ಕೂಡಿದ ಉಬ್ಬುಚಿತ್ರಣ ಫಲಕದಲ್ಲಿ ಕಥೆಯನ್ನು ನಿರೂಪಿಸಲಾಗಿದೆ. ನಿರಂತರ ನಿರೂಪಣೆಯ ವಿಗ್ರಹ/ಆಕೃತಿಗಳನ್ನು ಕಣ್ಣಿನ ಮಟ್ಟದಲ್ಲಿ ಇರಿಸಲಾಗಿದೆ ಮತ್ತು ಕಥೆಯನ್ನು ಪ್ರದಕ್ಷಿಣಾಕಾರ ರೂಪದಲ್ಲಿ ಓದಬೇಕು.
ದೇವರುಗಳಾದ ಬ್ರಹ್ಮ, ವಿಷ್ಣು ಮತ್ತು ಶಿವ ಗಾಂಭೀರ್ಯದಲ್ಲಿ ಕುಳಿತಿರುವುದರೊಂದಿಗೆ ಕಥೆಯು ಪ್ರಾರಂಭವಾಗುತ್ತದೆ. ಭೂಮಿಯ ಮತ್ತು ಅದರ ಜೀವಿಗಳ ಪುನರುತ್ಥಾನಕ್ಕಾಗಿ/ಪುನರುಜ್ಜೀವನಕ್ಕಾಗಿ, ಶಿವನೊಂದಿಗೆ ಪಾರ್ವತಿಯ ವಿವಾಹವನ್ನು ಏರ್ಪಡಿಸಲು ನಾಲ್ಕು ಮುನಿಗಳು ಅವರನ್ನು ವಿನಂತಿಸುತ್ತಾರೆ. ನಾವು ಮೂಲೆಯೊಂದರೆಡೆ ತಿರುಗಿದಂತೆ, ಬ್ರಹ್ಮ, ವಿಷ್ಣು, ಶಿವ ಮತ್ತು ಬಹುಶಃ ಐದು ತಲೆಯ ಶಿವನ ರೂಪವಾದ ಮಹೇಶ್ವರರು ತಮ್ಮತಮ್ಮ ವಾಹನಗಳ ಮೇಲೆ ಮದುವೆಗೆ ತೆರಳುತ್ತಿರುವುದು ಹಾಗೂ ಇಬ್ಬರು ತಪಸ್ವಿಗಳು ಅವರನ್ನು ಬರಮಾಡಿಕೊಳ್ಳುತ್ತಿರುವುದು ನಮಗೆ ಕಾಣಿಸುತ್ತದೆ.