ವಿಷ್ಣುವಿನ ಮನುಷ್ಯ-ಸಿಂಹ ಅವತಾರವಾದ ನರಸಿಂಹನ ಕಥೆಯನ್ನು ದೇವಾಲಯದ ಗೋಪುರದ ಪಶ್ಚಿಮ (ಒಳ) ಮುಖದ ಮೇಲೆ ಚಿತ್ರಿಸಲಾಗಿದೆ, ಇದನ್ನು ಮೇಲಿನಿಂದ ಕೆಳಕ್ಕೆ ಓದಬಹುದು. ಆಕೃತಿಗಳನ್ನು ಗಾರೆ/ಸಿಮೆಂಟ್ನಿಂದ ಮಾಡಲಾಗಿದ್ದು, ಗಾಢವಾದ ಬಣ್ಣಗಳಲ್ಲಿ ಚಿತ್ರಿಸಲಾಗಿದೆ.
ವಿಷ್ಣುವು ಎಲ್ಲೆಡೆ ಇರುವನೆಂದೂ, ಎಲ್ಲವನ್ನೂ ವ್ಯಾಪಿಸಿರುವನೆಂದೂ ಬಾಲ ಭಕ್ತ ಪ್ರಹ್ಲಾದನು ಪಟ್ಟು ಹಿಡಿದಾಗ, ಕ್ರೋಧಗೊಂಡ ಅವನ ಶಕ್ತಿಶಾಲಿ ರಾಕ್ಷಸ ತಂದೆ, ಹಿರಣ್ಯಕಶಿಪುವು, ಒಂದು ಕಂಭದವನ್ನು ತೋರಿಸಿ, ಈ ಕಂಭದಲ್ಲಿ ನಿಮ್ಮ ವಿಷ್ಣು ಇದ್ದಾನೆಯೇ?
ಎಂದು ಕೇಳುತ್ತಾನೆ. ಪ್ರಹ್ಲಾದನು ಶಾಂತವಾಗಿ ಉತ್ತರಿಸುತ್ತ, ಅವನು ಕಂಭದಲ್ಲಿ ಮಾತ್ರವಲ್ಲ, ಅತ್ಯಂತ ಪುಟ್ಟ ರೆಂಬೆಯಲ್ಲೂ ಇದ್ದಾನೆ
, ಎನ್ನುತ್ತಾನೆ.