Rotate your device!

ನೀವು ಪ್ರವೇಶಿಸಿದಾಗ ನಿಮ್ಮ ಎಡಭಾಗದಲ್ಲಿ ಕಥೆಯು ಗೋಡೆಯ ದಕ್ಷಿಣ ತುದಿಯಲ್ಲಿ ಪ್ರಾರಂಭವಾಗುತ್ತದೆ. ಉದ್ದನೆಯ ಗಡ್ಡ ಮತ್ತು ಜಡೆ ಹಾಕಿದ ಕೂದಲಿನ ಅರ್ಜುನನು ಕೈಯೆತ್ತಿ ಒಂದು ಕಾಲಿನ ಮೇಲೆ ನಿಂತು, ತಪಸ್ಸಿನಲ್ಲಿ ಆಳವಾಗಿ ಮಗ್ನನಾಗಿದ್ದಾನೆ. ಗೂಡಿನ ಇನ್ನೊಂದು ಬದಿಯಲ್ಲಿ ಹಂದಿ ಮೂಕಾಸುರ ಅರ್ಜುನನ ತಪಸ್ಸಿಗೆ ಭಂಗ ತರುತ್ತದೆ.

ಮುಂದಿನ ಎರಡು ಫಲಕಗಳು ಅರ್ಜುನ ಮತ್ತು ಕಿರಾತ ಶಿವ ಮೊದಲು ಅದೇ ಹಂದಿಯನ್ನು ಬೇಟೆಯಾಡುವುದನ್ನು ತೋರಿಸುತ್ತವೆ ಹಾಗೂ, ನಂತರ ಹಂದಿಯನ್ನು ಮೊದಲು ಹೊಡೆದವರು ಯಾರು ಎಂಬುದಕ್ಕೆ ಕಾಳಗ ಶುರುವಾಗುತ್ತದೆ. ಪಾರ್ವತಿ ದೇವಿಯು ತನ್ನ ಸಂಗಾತಿಯ ಹಿಂದೆ ನಿಂತಿರುವ ಬೇಟೆಗಾರ್ತಿ ಕಿರಾತಿಯಾಗಿ ಕಾಣಿಸಿಕೊಳ್ಳುತ್ತಾಳೆ. ಕಿರಾತ ಶಿವ ಮತ್ತು ಕಿರಾತಿ ಪಾರ್ವತಿ ಎಲೆಗಳ ವಸ್ತ್ರಗಳನ್ನು ಧರಿಸಿರುವುದನ್ನು ನೀವು ಗಮನಿಸಿದ್ದೀರಾ?

ಮಹಿಷಾಸುರಮರ್ಧಿನಿಯ ಸುಂದರವಾದ ಶಿಲ್ಪದ ಬಲಕ್ಕೆ ದ್ವಾರದ ಇನ್ನೊಂದು ಬದಿಯಲ್ಲಿ ಕಥೆ ಮುಂದುವರಿಯುತ್ತದೆ: ಅರ್ಜುನನು ಕಿರಾತ ಶಿವಇದು ನನ್ನ ಕುಸ್ತಿಯಾಡುತ್ತ ನೆಲಕ್ಕೆ ಉರುಳಿಸಿದ್ದಾನೆ, ಇದು ಕಿರಾತಿ ಪಾರ್ವತಿಗೆ ಅರ್ಜುನನ ಬೆನ್ನಿನ ಮೇಲೆ ಮಂಗಳಕರ ಗುರುತನ್ನು ನೋಡಲು ಅನುವು ಮಾಡಿಕೊಡುತ್ತದೆ.

ಕುಂಭಪಂಜರ ಈಟಿಯ ನಂತರ ಕಥೆ ಮುಂದುವರಿಯುತ್ತದೆ - ಅರ್ಜುನನು ಕಿರಾತ ಶಿವನಿಗೆ ಧರ್ಮನಿಷ್ಠೆಯ ಸೂಚಕವಾಗಿ ಶರಣಾಗುವುದನ್ನು ಕಾಣಬಹುದು. ನಂತರ, ವೃಷಭ ನಂದಿಯ ಮೇಲೆ ಕುಳಿತ ಶಿವ ಹಾಗೂ ಪಾರ್ವತಿಯಿಂದ ಪಾಶುಪತಾಸ್ತ್ರ ಆಯುಧವನ್ನು ಪಡೆಯುತ್ತಿರುವ ಕೆತ್ತನೆಯನ್ನು ತೋರಿಸಲಾಗಿದೆ. ಈ ಜಾಗದ ಕೆಳಗಿನ ರಿಜಿಸ್ಟರ್‌ನಲ್ಲಿ, ಕುಂಭಪಂಜರ ನೆಲೆಯ ಪಕ್ಕದಲ್ಲಿ ಎರಡು ಗಣಗಳು ನೃತ್ಯ ಮಾಡುತ್ತಾ ಕೊಂಬು ನುಡಿಸುತ್ತಿರುವುದುನ್ನು ಈ ಸ್ಥಳದ ಕೆಳಗಿನ ರೆಜಿಸ್ಟರ್ ಅಲ್ಲಿ ನೋಡಬಹುದು.

ಕಿರಾತಾರ್ಜುನಿಯ ಕಥೆಯ ನಂತರದ ಶಿಲ್ಪಗಳು ತಪಸ್ವಿಗಳು, ಬೇಟೆಗಾರರು ಮತ್ತು ಬೇಟೆಯ ವಿಷಯವನ್ನು ಮುಂದುವರಿಸುತ್ತವೆ. ಮೂರು ತಪಸ್ವಿಗಳು ಮತ್ತು ಲಿಂಗವನ್ನು ರಕ್ಷಿಸುವ ಐದು ಹೆಡೆಯ ಸರ್ಪದ ಶಿಲ್ಪವನ್ನು ಒಂದು ಗೂಡಿನ ಸುತ್ತಲೂ ಜೋಡಿಸಲಾಗಿದೆ, ಅದರೊಳಗೆ ವಿಚಿತ್ರವಾಗಿ ಇರಿಸಲಾದ ಹಾವಿನ ಕಲ್ಲು, ನಂತರದ ಸೇರ್ಪಡೆಯಾಗಿದೆ. ಬೇಟೆಗಾರನು ಜಿಂಕೆಯನ್ನು ಚೆನ್ನಾಗಿ ಗುರಿಯಿಟ್ಟು ಬಾಣದಿಂದ ಹೊಡೆದು ಉರುಳಿಸಿರುವುದನ್ನೂ,ಮತ್ತೊಬ್ಬನು ಜಿಂಕೆಯನ್ನು ಹೊರುತ್ತಿರುವುದನ್ನೂ, ತನ್ನ ಕಾಲಿನಿಂದ ಮುಳ್ಳನ್ನು ಕಿತ್ತು ಹಾಕುತ್ತಿರುವ ಬೇಟೆಗಾರ್ತಿಯನ್ನೂ, ಬೇಟೆಗಾರನು ಬಿಲ್ಲನ್ನು ಕಟ್ಟುತ್ತಿರುವ ಉಬ್ಬು ಶಿಲ್ಪಗಳನ್ನೂ ನೀವು ನೋಡಬಹುದು.

ಕಿರಾತಾರ್ಜುನೀಯ

ಮಹಾಭಾರತದ ಕಿರಾತಾರ್ಜುನೀಯ ಕಥೆಯು ಪಾಂಡವ ಅರ್ಜುನ ಮತ್ತು ಬೇಟೆಗಾರ ಕಿರಾತನ ವೇಷದಲ್ಲಿರುವ ಭಗವಾನ್ ಶಿವನ ನಡುವಿನ ಕಾಳಗವನ್ನು ವಿವರಿಸುತ್ತದೆ. ಮಧ್ಯಕಾಲೀನ ಬರಹಗಾರರು ಹಾಗೂ ಶಿಲ್ಪಿಗಳಲ್ಲಿ ಜನಪ್ರಿಯ ನಿರೂಪಣೆಯಾದ ಈ ಕಥೆಯನ್ನು ಮುಖ್ಯ ದೇಗುಲದ ಪೂರ್ವದ ಮುಂಭಾಗದಲ್ಲಿ ವಿಭಜಿಸಲಾಗಿದೆ.