Rotate your device!

ಶಿವಲಿಂಗಕ್ಕೆ ಅವನ ಅರ್ಪಣೆಗಳಲ್ಲಿ ಕಾಡು ಹೂವುಗಳು ಮತ್ತು ಅವನು ಬೇಟೆಯಾಡಿದ ಪ್ರಾಣಿಗಳ ಮಾಂಸವು ಇರುತ್ತಿತ್ತು. ದೇಗುಲವನ್ನು ಅಪವಿತ್ರಗೊಳಿಸಿದ್ದಕ್ಕೆ ಆಘಾತಗೊಂಡ ಬ್ರಾಹ್ಮಣ ಪೂಜಾರಿಯೊಬ್ಬರು ಕಣ್ಣಪ್ಪನನ್ನು ತಡೆಯಲು ಮುಂದಾದರು. ಆದರೆ ಶಿವನು ಅವನಿಗೆ ಕನಸಿನಲ್ಲಿ ಕಾಣಿಸಿಕೊಂಡು, ಬೇಟೆಗಾರನನ್ನು ಗುಪ್ತ ಸ್ಥಳದಿಂದ ಗಮನಿಸಲು ಹೇಳಿದನು.

ದೇವಾಲಯದ ಕತ್ತಲೆಯ ಪ್ರದಕ್ಷಿಣೆ ಮಾರ್ಗದಲ್ಲಿ ಅರ್ಧ-ಮುಗಿದ/ಅಪೂರ್ಣವಾದ ಕಂಭದ ಮೇಲೆ, ಉಡದಂತೆ ಕಾಣುವ ಪ್ರಾಣಿಯನ್ನು ಕಣ್ಣಪ್ಪನು ಶಿವಲಿಂಗಕ್ಕೆ ಅರ್ಪಿಸುತ್ತಿರುವುದನ್ನು ನಾವು ಕಾಣಬಹುದು.

ಒಂದು ದಿನ ಕಣ್ಣಪ್ಪ ಕಾಣಿಕೆಯೊಂದಿಗೆ ಹಿಂದಿರುಗಿದಾಗ ಶಿವಲಿಂಗದ ಒಂದು ಕಣ್ಣಿನಲ್ಲಿ ರಕ್ತ ಸುರಿಯುತ್ತಿರುವುದನ್ನು ಕಂಡನು. ಒಂದು ಕ್ಷಣವೂ ಯೋಚಿಸದೆ/ಯಾವುದೇ ಹಿಂಜರಿಕೆಯಿಲ್ಲದೆ, ಬೇಟೆಗಾರನು ತನ್ನ ಸ್ವಂತ ಕಣ್ಣನ್ನು ಕಿತ್ತು ರಕ್ತ ಸುರಿಯುತ್ತಿದ್ದ ಲಿಂಗದ ಕಣ್ಣಿನ ಸ್ಥಾನದಲ್ಲಿ, ತನ್ನ ಆರೋಗ್ಯವಂತ ಕಣ್ಣನ್ನು ಇಟ್ಟನು/ಕಸಿ ಮಾಡಿದನು. ಲಿಂಗದ ಎರಡನೆಯ ಕಣ್ಣಿನಿಂದಲೂ ರಕ್ತ ಕಾರಲು ಪ್ರಾರಂಭವಾದಾಗ, ಕಣ್ಣಪ್ಪ ತನ್ನ ಉಳಿದ ಎರಡನೆಯ ಕಣ್ಣನ್ನು ಪಡೆಯುವ ಕುಳಿಯನ್ನು ಗುರುತಿಸಲು ಲಿಂಗದ ಹಾನಿಗೊಳಗಾದ ಕಣ್ಣಿನ ಮೇಲೆ ತನ್ನ ಹೆಬ್ಬೆಟ್ಟನ್ನು ನೆಟ್ಟನು. ಅವನು ತನ್ನ ಎರಡನೆಯ ಕಣ್ಣನ್ನು ತೆಗೆಯಲು ಹೊರಡುವ ವೇಳೆಗೆ, ಶಿವನು ಪ್ರತ್ಯಕ್ಷನಾಗಿ, ಕಣ್ಣಪ್ಪನನ್ನು ತಡೆದು, ಅವನ ದೃಷ್ಟಿಯನ್ನು ಹಿಂತಿರುಗಿಸಿದನು.

ಕಣ್ಣಪ್ಪನ ಕಥೆ

ದೇವಾಲಯದಲ್ಲಿನ ಕೆಲವು ಕಂಭಗಳು ಶಿವನ ಮಹಾನ್ ಭಕ್ತನಾಗಿದ್ದ ಕಣ್ಣಪ್ಪ ಎಂಬ ಬುಡಕಟ್ಟು ಬೇಟೆಗಾರನ ಕಥೆಯನ್ನು ಹೇಳುತ್ತವೆ.