ಪುರಾಣ ಕಥೆಯ/ಐತಿಹ್ಯದ ಪ್ರಕಾರ, ರಾವಣನು ಒಮ್ಮೆ ತನ್ನ ವಾಹನವಾದ ಪುಷ್ಪಕ ವಿಮಾನದಲ್ಲಿ ಹಾರುತ್ತಿದ್ದಾಗ ಅಡಚಣೆಯನ್ನು ಎದುರಿಸಿದನು - ಅದು ಯಾವುದೆಂದರೆ ಶಿವ-ಪಾರ್ವತಿಯರ ವಾಸಸ್ಥಾನವಾದ ಅತ್ಯಂತ ಎತ್ತರದ ಕೈಲಾಸ ಪರ್ವತ. ಇದರಿಂದ ಕೋಪಗೊಂಡ ರಾವಣನು ತನ್ನ ಪ್ರಬಲವಾದ ತೋಳುಗಳಿಂದ ಪರ್ವತವನ್ನು ಎತ್ತಿದನು.

ಬಹಳಷ್ಟು ಗಾಬರಿಗೊಂಡ ಪಾರ್ವತಿಯೊಂದಿಗೆ ಪರ್ವತದ ಮೇಲೆ ಕುಳಿತಿದ್ದ ಭಗವಾನ್ ಶಿವನು ಭೂಮಿಯನ್ನು ಸ್ಥಿರಗೊಳಿಸಲು ಮತ್ತು ರಾವಣನನ್ನು ಸಾವಿರ ವರ್ಷಗಳ ಕಾಲ ಕೈಲಾಸದ ಕೆಳಗೆ ಸಿಲುಕಿಸಲು ತನ್ನ ಕಾಲಬೆರಳಿನಿಂದ ಪರ್ವತವನ್ನು ಒತ್ತಿದನು. ಇಲ್ಲಿ, ನಾಲ್ಕು ತೋಳುಗಳ ಶಿವನು ಮುಂಭಾಗದ, ಸುಖಾಸನ ಭಂಗಿಯಲ್ಲಿ ಕುಳಿತುಕೊಂಡು, ಪುಟ್ಟ ಆಕಾರದ ಪಾರ್ವತಿಯನ್ನು ತನ್ನ ಎಡ ತೊಡೆಯ ಮೇಲೆ ಕುಳ್ಳಿರಿಸಿಕೊಂಡಿರುವುದನ್ನು ನೀವು ನೋಡುತ್ತೀರಿ. ನಾಲ್ಕು ಋಷಿಗಳು ಶಿವನನ್ನು ಆರಾಧಿಸುತ್ತಿರುವುದನ್ನು ತೋರಿಸಲಾಗಿದೆ.

ಪವಿತ್ರ ಪರ್ವತವು ಸಂರಚನೆಯ ಮೇಲಿನ ಮೂರನೇ ಒಂದು ಭಾಗವನ್ನು ಮಾತ್ರ ಆಕ್ರಮಿಸಿಕೊಂಡಿದ್ದು, ಉಬ್ಬುಚಿತ್ರಣದಲ್ಲಿ ಒಂದರ ಮೇಲೆ ಒಂದು ವ್ಯಾಪಿಸಿರುವ ಬಂಡೆಗಳಾಗಿ ಪ್ರತಿನಿಧಿಸಲಾಗಿದೆ.

ಎರಡು ದುಂಡಗಿನ, ವಿನೋದಮಯ ಗಣಗಳು ರಾವಣನ ಪಾದಗಳ ಬಳಿ ಕುಣಿದಾಡುತ್ತ, ಅವನ ಸಮತೋಲನವನ್ನು ಕಾಪಾಡಿಕೊಳ್ಳಲು ನೆರವಾಗುತ್ತವೆ.

ಕೈಲಾಸ ಪರ್ವತವನ್ನು ಅಲುಗಾಡಿಸುತ್ತಿರುವ ರಾವಣ

ನೀವು ದೇವಾಲಯದ ಒಳಗಿನ ಪ್ರದಕ್ಷಿಣೆಯ ಪಥವನ್ನು ಪ್ರವೇಶಿಸುವ ಮೊದಲು, ನಿಮ್ಮ ಎಡಕ್ಕೆ, ಲಂಕೆಯ ರಾಜನಾದ ಹತ್ತು ತಲೆಯ ರಾವಣನು, ತನ್ನ ಇಪ್ಪತ್ತು ತೋಳುಗಳ ಪೈಕಿ, ಎರಡು ತೋಳುಗಳಿಂದ ಕೈಲಾಸ ಪರ್ವತವನ್ನು ಎತ್ತುತ್ತಿರುವ ಜೀವಂತ ಉಬ್ಬು ಚಿತ್ರಣವನ್ನು ಕಾಣುವಿರಿ. ಫಲಕದ ಮೇಲೆ ಆವರಿಸಿಕೊಂಡ/ರಾರಾಜಿಸುತ್ತಿರುವ ರಾಕ್ಷಸ-ರಾಜನು ತ್ರಿಭಂಗ ಭಂಗಿಯಲ್ಲಿ ನೃತ್ಯ ಮಾಡುತ್ತ, ತನ್ನ ತೋಳುಗಳನ್ನು ಗಿರಗಿರನೆ ತಿರುಗುವ ಫ್ಯಾನಿನ ಬ್ಲೇಡುಗಳಂತೆ ಮೇಲಕ್ಕೆ ಚಾಚಿದ್ದಾನೆ.